ಬಾಬಾಬುಡನ್ಗಿರಿ ಕೇಸರೀಕರಣಗೊಳಿಸಲು ಯತ್ನ: ಕೋಸೌವೇ

ಚಿಕ್ಕಮಗಳೂರು: ಬಾಬಾಬುಡನ್ ಗಿರಿಯನ್ನು ಕೇಸರೀಕರಣಗೊಳಿಸಲು ಸಂಘ ಪರಿವಾರ ಯತ್ನಿಸುತ್ತಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಘಟಕ ಮುಖಂಡರು ಆರೋಪಿಸಿದ್ದಾರೆ.
ದಾಖಲೆಗಳಲ್ಲಿ ಗುರುದತ್ತಾತ್ರೇಯಸ್ವಾಮಿ ದರ್ಗಾ ಎಂದಿರುವುದನ್ನು ದತ್ತ ಪೀಠ ಎಂದು ಬದಲಿಸಿ ನಾನಾ ಕಡೆಗಳಲ್ಲಿ ದಾಖಲಿಸುತ್ತಿರುವುದರನ್ನು ಖಂಡಿಸುವುದಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿದ್ದೀನ್ ಮತ್ತು ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಘಟಕ ಅಧ್ಯಕ್ಷ ಫೈರೋಜ್ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.